ಬೆಂಗಳೂರು: ಜ್ಞಾನಭಾರತಿ ವಾರ್ಡ್ ನಲ್ಲಿ ಶ್ರೀ ಸಾಯಿ ಸಿದ್ದಿ ಇವೆಂಟ್ಸ್ ಆಯೋಜಿಸಿರುವ ಆಹಾರ ಮತ್ತು ಶಾಪಿಂಗ್ ಮೇಳದಲ್ಲಿ ಪ್ರಖ್ಯಾತ ಹಿನ್ನಲೆ ಗಾಯಕ ಶಶಿಧರ್ ಕೋಟೆ ಮತ್ತು ತಂಡದಿಂದ ಗಾನಸುಧೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಹಿರಿಯ ಪತ್ರಕರ್ತ ಸುಧೀಂದ್ರ ರಾವ್, ಧನಪಾಲ್ ಜೈನ್ ಸೇರಿದಂತೆ ನೂರಾರು ಕಲಾಭಿಮಾನಿಗಳು ಸಂಗೀತ ರಸಸಂಜೆಯಲ್ಲಿ ಭಾಗವಹಿಸಿದ್ದರು.