ಆಯೋಜನೆ : ನಾಟ್ಯ ನಿನಾದ ನೃತ್ಯಾಲಯ

ಅನುಷಾ ರಾಘವೇಶ್ ಭರತನಾಟ್ಯ ರಂಗಪ್ರವೇಶ ಜ. 20 ರಂದು

ಬೆಂಗಳೂರು: ನಿನಾದ ನಾಟ್ಯಾಲಯದ ವಿದ್ಯಾರ್ಥಿ ಕುಮಾರಿ ಅನುಷಾ ರಾಘವೇಶ್ ಅವರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮ ಜನವರಿ 20 ರಂದು ಸಂಜೆ 5.45 ಕ್ಕೆ ಭಾರರತೀಯ ವಿದ್ಯಾಭವನದ ಕಿಂಚ ಸಭಾಂಗಣದಲ್ಲಿ ನಡೆಯಲಿದೆ.

ಮುಖ್ಯ ಅತಿಥಿಗಳಾಗಿ ಹಿರಿಯ ಕನ್ನಡ ಚಲನಚಿತ್ರ ನಟರಾದ ಕೆ.ಎಸ್.ಅಶ್ವಥ್ ಅವರ ಮಗಳು ಮತ್ತು ಹಿರಿಯ ನಾಟ್ಯ ಗುರುಗಳಾದ ವಿದುಷಿ ವಿಜಯಾ ಮೂರ್ತಿ ಭಾಗವಹಿಸಲಿದ್ದಾರೆ.

ಕುಮಾರಿ ಅನುಷಾ ರಾಘವೇಶ್ ಬಾಲ್ಯದಿಂದಲೇ ಗುರು ವಿದ್ವಾನ್ ಚೇತನ್ ಗಂಗಟ್ಕರ್ ಹಾಗೂ ವಿದುಷಿ ಚಂದ್ರಪ್ರಭ ಚೇತನ್ ರವರಲ್ಲಿ ಭರತನಾಟ್ಯಾಭ್ಯಾಸ ಮಾಡುತ್ತಿದ್ದು ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ನಡೆಸುವ ಕಿರಿಯ ದರ್ಜೆಯ ಭರತನಾಟ್ಯ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯೊಂದಿಗೆ ಉತ್ತೀರ್ಣಳಾಗಿದ್ದಾರೆ. ತನ್ನ ನಾಟ್ಯ ಶಾಲೆಯಾದ ನಾಟ್ಯ ನಿನಾದ ನೃತ್ಯಾಲಯದೊಂದಿಗೆ ಹಲವಾರು ನೃತ್ಯ ಉತ್ಸವಗಳಲ್ಲೂ ಸಹ ಪಾಲ್ಗೊಂಡಿದ್ದಾರೆ. ಕಲೆಯಲ್ಲಿ ಉನ್ನತ ಆಸಕ್ತಿ ಹೊಂದಿರುವ ಅವರು ಭರತನಾಟ್ಯದೊಂದಿಗೆ ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಗೂ ಕಥಕ್ ಸಹ ಕಲಿಯುತ್ತಿದ್ದಾರೆ.

Related Articles

ಪ್ರತಿಕ್ರಿಯೆ ನೀಡಿ

Latest Articles