ಭಜನ – ಪ್ರವಚನ – ಹರಿನಾಮ- ಸಂಕೀರ್ತನ

ಬೆಂಗಳೂರು: ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ಹಾಗೂ ಶ್ರೀ ಗೀತಾ ಮಂದಿರ ಶ್ರೀರಾಮಪುರ ಇವುಗಳ ಸಂಯುಕ್ತಾಶ್ರಯದಲ್ಲಿ, ಸೆಪ್ಟೆಂಬರ್ 19 ರಿಂದ 25ರ ವರೆಗೆ ಧಾರ್ಮಿಕ/ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದು, ಅವುಗಳ ವಿವರಗಳು ಈ ರೀತಿ ಇವೆ:

ಸೆಪ್ಟೆಂಬರ್ 19 ರಿಂದ 24ರ ವರೆಗೆ ಪ್ರತಿದಿನ ಸಂಜೆ 6 ರಿಂದ 7ರವರೆಗೆ ವಿವಿಧ ಭಜನಾ ಮಂಡಳಿಗಳಿಂದ ಭಜನಾಮೃತ, 7 ರಿಂದ 8ರ ವರೆಗೆ ಶ್ರೀ ದ್ವೈಪಾಯನಾಚಾರ್ ಇವರಿಂದ ಶ್ರೀ ವಾದಿರಾಜರ ವಿರಚಿತ “ಶ್ರೀ ರುಕ್ಮಿಣೀಶ ವಿಜಯ” ಧಾರ್ಮಿಕ ಪ್ರವಚನ.

ರಶ್ಮಿ ಮಧುಸೂದನ್

ಸೆಪ್ಟೆಂಬರ್ 25, ಭಾನುವಾರ, ಸಂಜೆ 6-30 ವಿದುಷಿ ಶ್ರೀಮತಿ ರಶ್ಮಿ ಮಧುಸೂದನ್ ಕೊನೆಘಟ್ಟ ಇವರಿಂದ “ಹರಿನಾಮ ಸಂಕೀರ್ತನೆ”.

ವಾದ್ಯ ಸಹಕಾರ : ಶ್ರೀ ಅಮಿತ್ ಶರ್ಮ (ಕೀ-ಬೋರ್ಡ್), ಶ್ರೀ ರಂಗವಿಠಲರಾವ್ ಕೆ. ಎಂ. (ತಬಲಾ).

ಕಾರ್ಯಕ್ರಮ ನಡೆಯುವ ಸ್ಥಳ: ಶ್ರೀ ಗೀತಾ ಮಂದಿರ ಟ್ರಸ್ಟ್ 33 ನಾಲ್ಕನೇ ಅಡ್ಡರಸ್ತೆ ಶ್ರೀರಾಮಪುರ ಬೆಂಗಳೂರು.

Related Articles

ಪ್ರತಿಕ್ರಿಯೆ ನೀಡಿ

Latest Articles