ಶ್ರೀ ಮುಖ್ಯಪ್ರಾಣ ದೇವ ಮಂದಿರದ ಜೀರ್ಣೋದ್ಧಾರ ಹಾಗೂ ವಾರ್ಷಿಕೋತ್ಸವ

ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ಆದವಾನಿ ತಾಲ್ಲೂಕಿನ ಕೌತಾಳಂ ಹೋಬಳಿಯ ಕುಂಟನಹಾಳು ಗ್ರಾಮದಲ್ಲಿರುವ ಶ್ರೀ ವ್ಯಾಸರಾಜರ ಪ್ರತಿಷ್ಠಿತ ಶ್ರೀ ಮುಖ್ಯಪ್ರಾಣ ದೇವರ ಗುಡಿಯ ಜೀರ್ಣೋದ್ಧಾರ ಮತ್ತು ಪ್ರತಿಮೆಯ ಪುನಃ ಪ್ರತಿಷ್ಠಾಪನಾ ಸಮಾರಂಭವು ಉಡುಪಿ ಫಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದಂಗಳವರ ಅಮೃತ ಹಸ್ತದಿಂದ ನೆರವೇರಿಸಲಾಗಿತ್ತು. ಇತ್ತೀಚೆಗೆ ದೇವಸ್ಥಾನದ ವಾರ್ಷಿಕೋತ್ಸವವೂ  ಜರುಗಿತು. ಇದರ ಅಂಗವಾಗಿ ಸ್ವಾಮಿಗೆ ಫಲ-ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ, ಮಹಾಮಂಗಳಾರತಿ ಕಾರ್ಯಕ್ರಮಗಳು ಜರುಗಿದವು. ಅನೇಕ ಭಕ್ತಾದಿಗಳು ಭಾಗವಹಿಸಿದ್ದರು. ಈ ಎಲ್ಲಾ ಕಾರ್ಯಕ್ರಮಗಳೂ ಪ್ರಧಾನ ಅರ್ಚಕರಾದ ಶ್ರೀ ಭೀಮಸೇನಾಚಾರ್ಯ ಹಾಗೂ ಸಹ-ಅರ್ಚಕರಾದ ಶ್ರೀ ಅಖಿಲ್ ಆಚಾರ್ಯ ಅವರ ನೇತೃತ್ವದಲ್ಲಿ ಜರುಗಿದವು.

Related Articles

ಪ್ರತಿಕ್ರಿಯೆ ನೀಡಿ

Latest Articles