ಮಂತ್ರಾಲಯದಲ್ಲಿ ವಿಷ್ಣುಸಹಸ್ರನಾಮ ಸಮ್ಮೇಳನ ಡಿ.12 ರಂದು

ಮಂತ್ರಾಲಯ: ಮಂತ್ರಾಲಯದ ರಾಜಾಂಗಣದಲ್ಲಿ ‘ ರಾಷ್ಟ್ರೀಯ ವಿಷ್ಣುಸಹಸ್ರನಾಮ ಸಮ್ಮೇಳನ ’ ಹಾಗೂ ಸಾಮೂಹಿಕ ವಿಷ್ಣುಸಹಸ್ರನಾಮ ಪಾರಾಯಣ ಪರಮಪೂಜ್ಯ ಶ್ರೀ ಡಾ.ಸುಬುಧೇಂದ್ರ ತೀರ್ಥ ಶ್ರೀಪಾದರ ಸಾನ್ನಿಧ್ಯದಲ್ಲಿ ಡಿ.12 ರಂದು ನಡೆಯಲಿದೆ.


ಗ್ಲೋಬಲ್ ವಿಷ್ಣುಸಹಸ್ರನಾಮ ಸತ್ಸಂಗ ಫೆಡರೇಷನ್ ಸಂಸ್ಥೆಯು ಶ್ರೀಮಠದ ಸಹಯೋಗದಲ್ಲಿ ಏರ್ಪಡಿಸಿರುವ ಈ ಕಾರ್ಯಕ್ರಮದಲ್ಲಿ ಗ್ಲೋಬಲ್ ವಿಷ್ಣುಸಹಸ್ರನಾಮ ಸತ್ಸಂಗ ಫೆಡರೇಷನ್ ವತಿಯಿಂದ ಪೂಜ್ಯ ಶ್ರೀಪಾದರಿಗೆ ‘ಯತಿ ರಾಷ್ಟ್ರ ರತ್ನ’ ಗುರವಂದನಾ ಗೌರವ ಪ್ರಶಸ್ತಿ ಸಮರ್ಪಿಸಲಾಗುತ್ತಿದೆ

ಡಾ.ಅರಳುಮಲ್ಲಿಗೆ ಪಾರ್ಥಸಾರಥಿ

. ಇದೇ ಸಂದರ್ಭದಲ್ಲಿ ಹರಿದಾಸ ಸಾಹಿತ್ಯ ವಿದ್ವಾಂಸ ವಿದ್ಯಾವಾಚಸ್ಪತಿ ಡಾ.ಅರಳುಮಲ್ಲಿಗೆ ಪಾರ್ಥಸಾರಥಿ ಅರಳುಮಲ್ಲಿಗೆ ಅವರು ರಚಿಸಿರುವ ‘ವಿಷ್ಣುಸಹಸ್ರನಾಮದ ಅರ್ಥಗಳು’ ಗ್ರಂಥದ ಐದನೆಯ ಆವೃತ್ತಿ ಬಿಡುಗಡೆಗೊಳ್ಳಲಿದೆ.

Related Articles

ಪ್ರತಿಕ್ರಿಯೆ ನೀಡಿ

Latest Articles