ಹರಿದಾಸ ವಾಣಿ

ಬೆಂಗಳೂರು: ಜಯನಗರ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್. ಕೆ. ವಾದೀಂದ್ರಾಚಾರ್ ಅವರ ನೇತೃತ್ವದಲ್ಲಿ ಶ್ರೀ ರಾಮ ನವಮಿ ಪ್ರಯುಕ್ತ ಮಾರ್ಚ್ 30, ಗುರುವಾರ ಸಂಜೆ 7-30ಕ್ಕೆ ಕಲಾಂಬಿಕ ಸಹೋದರಿಯರಾದ  ವಿ|| ಕಲಾಧರಿ ಭವಾನಿ ಮತ್ತು ವಿ|| ಅಂಬಿಕಾ ಜಿ. ದತ್ ಇವರುಗಳಿಂದ “ಹರಿದಾಸವಾಣಿ”  ಗಾಯನ ಕಾರ್ಯಕ್ರಮ ಏರ್ಪಡಿಸಿದೆ ಎಂದು ಶ್ರೀ ನಂದಕಿಶೋರ್ ಆಚಾರ್ ಅವರು ತಿಳಿಸಿದ್ದಾರೆ.

ವಾದ್ಯ ಸಹಕಾರ : ವಿ|| ಪ್ರೇಮಾ ವಿವೇಕ್ (ಪಿಟೀಲು), ವಿ|| ದೀಪಿಕಾ ಶ್ರೀನಿವಾಸನ್ (ಮೃದಂಗ). ಸ್ಥಳ : ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, ಜಯನಗರ 5ನೇ ಬಡಾವಣೆ.

Related Articles

ಪ್ರತಿಕ್ರಿಯೆ ನೀಡಿ

Latest Articles