ಭಜನ-ಪ್ರವಚನ-ಹರಿನಾಮ ಸಂಕೀರ್ತನ

ಬೆಂಗಳೂರು: ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ  ಸರಸ್ವತಿನಗರದಲ್ಲಿರುವ (ಗೋವಿಂದರಾಜನಗರ ಪೋಲಿಸ್ ಸ್ಟೇಷನ್ ಪಕ್ಕ) ಶ್ರೀ ವೀರಾಂಜನೇಯಸ್ವಾಮಿ ದೇವಸ್ಥಾನದಲ್ಲಿ ನವೆಂಬರ್ 15 ರಿಂದ 18ರ ವರೆಗೆ (ಪ್ರತಿದಿನ ಸಂಜೆ 6 ರಿಂದ 8 ಗಂಟೆ) ಧಾರ್ಮಿಕ / ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದು ಅವುಗಳ ವಿವರಗಳು ಈ ರೀತಿ ಇವೆ :

ನವೆಂಬರ್ 15, ಬುಧವಾರ : ಶ್ರೀ ಶ್ರೀಪಾದರಾಜರ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, ಶ್ರೀ ಕಲ್ಯಾ ಶ್ರೀಕಾಂತಾಚಾರ್ಯರಿಂದ “ಸುಂದರಕಾಂಡ” ಪ್ರವಚನ.

ನವೆಂಬರ್ 16, ಗುರುವಾರ : ಪವಿತ್ರ ಗಾನ ವೃಂದದವರಿಂದ ಭಜನೆ, ಶ್ರೀ ಕಲ್ಯಾ ಶ್ರೀಕಾಂತಾಚಾರ್ಯರಿಂದ “ಸುಂದರಕಾಂಡ” ಪ್ರವಚನ.

ನವೆಂಬರ್ 17, ಶುಕ್ರವಾರ : ಆನಂದ ಭಜನಾ ಮಂಡಳಿಯ ಸದಸ್ಯರಿಂದ ಭಜನೆ.

ನವೆಂಬರ್ 18, ಶನಿವಾರ : “ಹರಿನಾಮ ಸಂಕೀರ್ತನೆ” ಗಾಯನ : ಕು|| ಮನಸ್ವಿ ಕಶ್ಯಪ್, ಕೀ-ಬೋರ್ಡ್ : ಶ್ರೀ ಅಮಿತ್ ಶರ್ಮಾ, ತಬಲಾ : ಶ್ರೀ ಸರ್ವೋತ್ತಮ. ಈ ಎಲ್ಲಾ ಕಾರ್ಯಕ್ರಮಗಳಲ್ಲೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಭಗವಂತನ ಕೃಪೆಗೆ ಪಾತ್ರರಾಗಬೇಕೆಂದು ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ತಿನ ಕಾರ್ಯಕ್ರಮಗಳ ಸಂಚಾಲಕರಾದ ಡಾ|| ಪಿ. ಭುಜಂಗರಾವ್ ಅವರು ವಿನಂತಿಸಿದ್ದಾರೆ.

Related Articles

ಪ್ರತಿಕ್ರಿಯೆ ನೀಡಿ

Latest Articles