ಹನುಮ ಮಾಲಾಧಾರಣೆ

ರಂಗಾಪೂರದಲ್ಲಿ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರಿಂದ ಹನುಮ ಮಾಲೆ ಧರಿಸಿ ವೃತಾಚರಣೆ ಆರಂಭ

ಮೂಡಲಗಿ: ಶ್ರೀರಾಮಚಂದ್ರನಿಗೆ ಹನುಮಂತ ಹೇಗೆ ಸೇವೆ ಸಲ್ಲಿಸಿದರು ಹಾಗೆ ಹನುಮಂತನ ಭಕ್ತರು ಸೇವೆಸಲ್ಲಿಸಿ ನಮ್ಮ ದೇಶದ ರಕ್ಷಣೆಗಾಗಿ ಎಲ್ಲ ಹನುಮ ಮಾಲಾಧಾರಿಗಳು ಸೇವೆಸಲ್ಲಿಸೋಣ ಎಂದು ಚಿಕ್ಕೋಡಿ ಜಿಲ್ಲಾ ವಿಶ್ವಹಿಂದೂ ಪರಿಷತ್-ಭಜರಂಗದಳದ ಧರ್ಮ ಪ್ರಸಾರ ಪ್ರಮುಖರಾದ ಸಿದ್ದಪ್ಪ ತಿಗಡಿ ಹೇಳಿದರು.

ಮೂಡಲಗಿ ತಾಲೂಕಿನ ರಂಗಾಪೂರ ಗ್ರಾಮದ ಹನುಮಾನ ಮಂದಿರದಲ್ಲಿ ವಿಶ್ವಹಿಂದೂ ಪರಿಷತ್-ಭಜರಂಗದಳ ಕಾರ್ಯಕರ್ತರಿಂದ ಜರುಗಿದ ಹನುಮ ಮಾಲಾಧಾರಣೆ ಕಾರ್ಯಕ್ರಮದಲ್ಲಿ ಮಾತನಾಡಿ, “ಹನುಮಂತನ ಭಕ್ತರು ಭಕ್ತಿಯ ಮಾರ್ಗದಲ್ಲಿ ನಡೆದು ಸಮಾಜದಲ್ಲಿ ನಮ್ಮ ಸಂಸ್ಕೃತಿ ಮತ್ತು ಧರ್ಮವನ್ನು ಕಾಪಾಡಲು ಮುಂದಾಗಬೇಕೆಂದರು. ತಾಲೂಕಾ ಕಾರ್ಯದರ್ಶಿ ದಯಾನಂದ ಸವದಿ ಮಾತನಾಡಿ, ಹನುಮ ಮಾಲಾಧಾರಿಗಳು ಪ್ರತಿದಿನ ಸೂರ್ಯೋದಯ ಮುಂಚೆ ಹನಮಂತ ಪೂಜೆಯೊಂದಿಗೆ ಹನುಮಾನ್ ಚಾಲೀಸಾ ಪಠಣ, ಹನುಮ ಮಾಲೆ ಧರಿಸುವುದರಿಂದ ಮನುಷ್ಯನಲ್ಲಿ ಒಳ್ಳೆಯ ಚೈತನ್ಯ, ಆತ್ಮಸ್ಥರ್ಯ, ಸಂಸ್ಕಾರವಂತರಾಗುವದರೊಂದಿಗೆ ದುಷ್ಟಶಕ್ತಿಗಳು ದೂರಾಗುತ್ತವೆ ಎಂದರು.

ಮೂಡಲಗಿಯ ರಾಘವೇಂದ್ರಾಚಾರ್ಯ ತೆಗ್ಗಿ ಹಾಗೂ ಮೂಡಲಗಿ ತಾಲೂಕಾ ವಿಶ್ವಹಿಂದೂ ಪರಿಷತ್-ಭಜರಂಗದಳದ ಸಂಯೋಜಕ ಶ್ರೀಧರ ಬಡಿಗೇರ ಪವಮಾನ ಹೋಮವನ್ನು ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಹನುಮ ಮಾಲೆ ಧರಿಸಿದ 200 ಮಾಲಾಧಾರಿಗಳು ಹನುಮಾನ್ ಚಾಲೀಸಾ ಪಠಣ ಮಾಡಿದರು.

ಈ ಸಮಯಲ್ಲಿ ಮೂಡಲಗಿ ಭಜರಂಗದಳ ಪ್ರಮುಖ ಕಾರ್ಯಕರ್ತರಾದ ದುಂಡಪ್ಪ ಹಳ್ಳೂರ, ಮಾರುತಿ ಶಿಂಧೆ, ಬಸವರಾಜ ಗುಡ್ಲಿ, ಸಚೀನ ತಳವಾರ, ಮಹಾಂತೇಶ ಮುಗಳಖೋಡ, ರಾಮಚಂದ್ರ ಪಾಟೀಲ, ಶಿವಾನಂದ ಪೂಜೇರಿ, ಕೃಷ್ಣಾ ಸೋನವಾಲಕರ, ಸಚೀನ ಮುಗಳಖೋಡ, ಸಂಗಯ್ಯಾ ಹಿರೇಮಠ, ರಜನಿಕಾಂತ ಪಾತ್ರೋಟ, ರಾಮು ವೆಂಕಟಾಪೂರ, ಹನಮಂತ ಗಿಡ್ಡನವರ, ಮಂಜು ಹೇಳವರ, ಪವನಕುಮಾರ ಮುನ್ಯಾಳ, ಶಿವಾನಂದ ಕೊಪ್ಪದ ಸೇರಿದಂತೆ ಮೂಡಲಗಿ, ರಂಗಾಪೂರ, ಮುನ್ಯಾಳ, ಹಳ್ಳೂರ, ಗುರ್ಲಾಪೂರ, ಪಟಗುಂದಿ, ಧರ್ಮಟ್ಟಿ, ತುಕ್ಕಾನಟ್ಟಿ, ಹುಣಶ್ಯಾಳ, ನಾಗನೂರ, ಕಲ್ಲೋಳಿ, ತಳಕಟನಾಳ ಮತ್ತು ಮೂಡಲಗಿ ತಾಲೂಕಿನ ವಿವಿಧ ಗ್ರಾಮದಿಂದ ಹನುಮಂತ ಮಾಲೆಯನ್ನು ಧರಿಸಿದರು. ಮೂಡಲಗಿ: ರಂಗಾಪೂರದಲ್ಲಿ ವಿಶ್ವಹಿಂದೂ ಪರಿಷತ್-ಭಜರಂಗದಳ ಕಾರ್ಯಕರ್ತರಿಂದ ಜರುಗಿದ ಹನುಮ ಮಾಲಾಧಾರಣೆ ಕಾರ್ಯಕ್ರಮದಲ್ಲಿ ರಾಘವೇಂದ್ರಾಚಾರ್ಯ ತೆಗ್ಗಿ ಮಾಲಾಧಾರಿಗಳಿಗೆ ಮಂತ್ರಪಠಣ ಮಾಡಿಸಿದರು.

Related Articles

ಪ್ರತಿಕ್ರಿಯೆ ನೀಡಿ

Latest Articles