ರಾಮಕೃಷ್ಣ ಮಠದಲ್ಲಿ ವಿಶೇಷ ರಿಯಾಯಿತಿಯಲ್ಲಿ ಪುಸ್ತಕಗಳ ಮಾರಾಟ

ಬೆಂಗಳೂರು: ವಿವೇಕಾನಂದರ ಜಯಂತಿ ಅಂಗವಾಗಿ ಪ್ರತಿ ವರ್ಷದಂತೆ ಈ ವರ್ಷವು ನಗರದ ಬಸವನಗುಡಿಯಲ್ಲಿರುವ ರಾಮಕೃಷ್ಣ ಮಠದಲ್ಲಿ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಏರ್ಪಡಿಸಲಾಗಿದೆ. ಡಿ.28ರಿಂದ ಜ.15ರವರೆಗೆ ವಿಶೇಷ ರಿಯಾಯಿತಿಯಲ್ಲಿ ಪುಸ್ತಕಗಳ ಮಾರಾಟ ಇರಲಿದೆ. ಪುಸ್ತಕಗಳ ಮೇಲೆ ಶೇ.10ರಿಂದ ಶೇ.50ರವರೆಗೆ ರಿಯಾಯಿತಿ ಸಿಗಲಿದೆ. ಈ ದಿನಗಳಂದು ಪ್ರತಿದಿನ ಬೆಳಗ್ಗೆೆ 9.30ರಿಂದ ರಾತ್ರಿಿ 8.30ರವರೆಗೆ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಇರಲಿದೆ.

ಭಾರತೀಯ ಸಂಸ್ಕೃತಿ, ಸನಾತನ ಧರ್ಮವನ್ನು ಸುಲಲಿತವಾಗಿ ಬೋಧಿಸುವ ರಾಮಕೃಷ್ಣ, ವಿವೇಕಾನಂದ ಹಾಗೂ ವೇದಾಂತ ಸಾಹಿತ್ಯ, ಧ್ಯಾಾನ ಮತ್ತು ಯೋಗದ ಬಗೆಗಿನ ಗ್ರಂಥಗಳು, ವ್ಯಕ್ತಿಿತ್ವ ವಿಕಸನ, ಚಾರಿತ್ರ್ಯ ನಿರ್ಮಾಣದ ಸಂದೇಶಗಳ ಬಗ್ಗೆೆ ಸ್ವಾಾಮಿ ವಿವೇಕಾನಂದರ ಪುಸ್ತಕಗಳು, ಮಕ್ಕಳಿಗಾಗಿ ರಾಮಾಯಣ, ಮಹಾಭಾರತ ಮತ್ತು ರಾಮಕೃಷ್ಣರ ದೃಷ್ಟಾಾಂತ ಕಥೆಗಳ ಪುಸ್ತಕಗಳು, ಪ್ರವಚನ, ಭಜನೆ, ಸ್ತೋೋತ್ರ, ವೇದಪಠಣ ಕುರಿತಾದ ಧ್ವನಿಸುರಳಿ, ಡಿವಿಡಿ ಲಭ್ಯವಿರಲಿದೆ. ಆಸಕ್ತರು ಭೇಟಿ ನೀಡಿ ಇದರ ಪ್ರಯೋಜನ ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ.

Related Articles

ಪ್ರತಿಕ್ರಿಯೆ ನೀಡಿ

Latest Articles