ಬಸವಣ್ಣ ಜಯಂತ್ಯುತ್ಸವ


ಚಿತ್ರದುರ್ಗ: ಜಿಲ್ಲಾವೀರಶೈವ ಸಮಾಜದಿಂದ ವಿಶ್ವಗುರು ಬಸವಣ್ಣನ ಜಯಂತಿ ಅಂಗವಾಗಿ ಮೇ 9, 10ರಂದು ನಾನಾ ಕಾರ್ಯಕ್ರಮ ಆಯೋಜಿಸಲಾಗಿದೆ.
ವೀರಶೈವ ಯುವ ಸಂಘಟನೆಯಿಂದ ಮೇ 9ರ ಮಧ್ಯಾಹ್ನ 3.30ಕ್ಕೆ ಬೈಕ್‌ ರಾರ‍ಯಲಿ ಆಯೋಜಿಸಿದ್ದು, ನಗರದ ನೀಲಕಂಠೇಶ್ವರ ಸ್ವಾಮಿ ದೇವಾಲಯದಿಂದ ಪ್ರಾರಂಭವಾಗಿ ಪ್ರಮುಖ ಬೀದಿಗಳಲ್ಲಿಸಂಚರಿಸಿ ಮರಳಿ ದೇವಸ್ಥಾನದಲ್ಲಿಸಮಾಪ್ತಿಯಾಗಲಿದೆ.
ಮೇ 10ರ ಸಂಜೆ 4 ಗಂಟೆಗೆ ಆಯೋಜಿಸಿರುವ ಶ್ರೀಬಸವೇಶ್ವರರ ಭಾವಚಿತ್ರ ಮೆರವಣಿಗೆಯಲ್ಲಿನಾನಾ ಕಲಾ ತಂಡಗಳು ಭಾಗವಹಿಸಲಿವೆ. ದೇವಸ್ಥಾನದಿಂದ ಆರಂಭವಾಗುವ ಮೆರವಣಿಗೆ ಗಾಂಧಿ ವೃತ್ತ, ಆನೆ ಬಾಗಿಲು, ಚಿಕ್ಕಪೇಟೆ, ದೊಡ್ಡಪೇಟೆ, ರಂಗಯ್ಯನಬಾಗಿಲು, ಬಸವಮಂಟಪ ರಸ್ತೆ ಅಂಬೇಡ್ಕರ್‌ ವೃತ್ತ, ಬಿ.ಡಿ.ರಸ್ತೆಯ ಮೂಲಕ ಮರಳಿ ದೇವಸ್ಥಾನ ತಲುಪಲಿದೆ.
ಕಾರ್ಯಕ್ರಮಗಳಲ್ಲಿಬಸವತತ್ವ ಅಭಿಮಾನಿಗಳು ಸಮಾಜದವರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿಆಗಮಿಸಿ ಜಯಂತಿ ಯಶಸ್ವಿಗೂಳಿಸಬೇಕು ಎಂದು ವೀರಶೈವ ಸಮಾಜದ ಅಧ್ಯಕ್ಷ ಎಚ್‌.ಎನ್‌.ತಿಪ್ಪೇಸ್ವಾಮಿ ಪ್ರಕಟಣೆಯಲ್ಲಿಮನವಿ ಮಾಡಿದ್ದಾರೆ.

Related Articles

ಪ್ರತಿಕ್ರಿಯೆ ನೀಡಿ

Latest Articles