ಆನಂದಪುರ ಹಿಂದುಳಿದ ಕೇರಿಗೆ ಭೇಟಿ ನೀಡಿದ ಶ್ರೀ ಸುಗುಣೇಂದ್ರ ತೀರ್ಥರು

ಬೆಂಗಳೂರು: ಹಿಂದೂ ಸೇವಾ ಪ್ರತಿಷ್ಠಾನ ನೇತೃತ್ವದಲ್ಲಿ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಡಿ. 20ರಂದು ಬೆಂಗಳೂರಿನ ಆನಂದಪುರ ಹಿಂದುಳಿದ ಕೇರಿಗೆ ಭೇಟಿ ನೀಡಿ ಅಲ್ಲಿನ ಭಕ್ತರಿಗೆ ಉಡುಪಿ ಶ್ರೀ ಕೃಷ್ಣ ಮುಖ್ಯಪ್ರಾಣರ ಪ್ರಸಾದ ನೀಡಿ ಅನುಗ್ರಹಿಸಿದರು.

ಕಾರ್ಯಕ್ರಮ ಸಂಯೋಜಕರಾದ ಹಿಂದೂ ಸೇವಾ ಪ್ರತಿಷ್ಠಾನದ ಮುಖ್ಯಸ್ಥರಾದ ಮಿಲಿಂದ್ ಗೋಖಲೆ ಸುರೇಶ ರಾವ್, ಜಯಸಿಂಹ ಆನಂದ ಪುರ ಕಮಿಟಿಯ ಅಧ್ಯಕ್ಷ ಬಾಲಕೃಷ್ಣ, ಉಪಾಧ್ಯಕ್ಷ ಮಾರಿಮುತ್ತು ಶ್ರೀಪಾದಂಗಳವರ ನೂರಾರು ಅನುಯಾಯಿಗಳು ಭಾಗವಹಿಸಿದ್ದರು.


Related Articles

ಪ್ರತಿಕ್ರಿಯೆ ನೀಡಿ

Latest Articles