ವಚನಗೋಷ್ಠಿ, ಹೆಸರು ನೋಂದಾವಣೆಗೆ ಕಡೇ ದಿನ ಜ. 5

ಗದಗ: ಇಲ್ಲಿನ ಡಾ.ಪಂಡಿತ ಪುಟ್ಟರಾಜ ಸೇವಾ ಸಮಿತಿ ಆಧುನಿಕ ವಚನ ಗೋಷ್ಠಿ ಗುರುವಚನ ಪ್ರಭ ಕಾರ್ಯಕ್ರಮವನ್ನು ಜನವರಿಯಲ್ಲಿ ದಾವಣಗೆರೆಯಲ್ಲಿ ಹಮ್ಮಿಕೊಳ್ಳಲಾಗುವುದು.
ಇದೇ ಕಾರ್ಯಕ್ರಮದಲ್ಲಿ “ಆದ್ಯರ ವಚನ ಓದು ಮತ್ತು ಚಿಂತನ ಮಂಥನ’ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ.

ವೀರಶೈವ ಮಹಾಸಭೆ, ಶರಣ ಸಾಹಿತ್ಯ ಪರಿಷತ್ ಹಮ್ಮಿಕೊಂಡಿರುವ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿಚ್ಚಿಸುವವರು ಡಾ. ಪಂ. ಪುಟ್ಟರಾಜ ಸೇವಾ ಸಮಿತಿ ಗದಗ ಇವರ ವಾಟ್ಸಾಪ್ ನಂ 9535774136 ತಮ್ಮ ಹೆಸರು ನೋಂದಾಯಿಸಿಕೊಳ್ಳಲು ಕೋರಲಾಗಿದೆ. ಹೆಸರು ನೋಂದಾಯಿಸಿಕೊಳ್ಳಲು ಜನವರಿ 5 ಕೊನೆಯ ದಿನ ಎಂದು ಜಿಲ್ಲಾ ಸಂಚಾಲಕ ಶಿವಬಸಯ್ಯ ಚರಂತಿಮಠ ಇವರು ಪ್ರತಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

ಪ್ರತಿಕ್ರಿಯೆ ನೀಡಿ

Latest Articles