ಶ್ರೀ ಸತ್ಯನಾರಾಯಣ ಸ್ವಾಮಿ ದೇಗುಲದಲ್ಲಿ ವೈಕುಂಠ ಏಕಾದಶಿ

ಬೆಂಗಳೂರು: ಜನವರಿ 13ರಂದು ವೈಕುಂಠ ಏಕಾದಶಿ ಪ್ರಯುಕ್ತ ಚಾಮರಾಜಪೇಟೆಯ ಶ್ರೀ ಸತ್ಯನಾರಾಯಣ ಸ್ವಾಮಿ, ಶ್ರೀ ಮಹಾಲಕ್ಷ್ಮಿ ಹಾಗೂ ಮುತ್ತಿನ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಬೆಳಗ್ಗೆ 4 ಗಂಟೆಗೆ ಸುಪ್ರಭಾತ ಸೇವೆ ಉತ್ಸವಮೂರ್ತಿಗೆ ನಿತ್ಯ ಕೈಂಕರ್ಯಗಳು, ಆರಾಧನೆ, ಅರ್ಚನೆ, ನಿವೇದನೆ, ಮಂತ್ರ ಪುಷ್ಪ, ಪ್ರಾಕಾರ ಉತ್ಸವ, 5 ಗಂಟೆಗೆ ಉತ್ತರ ಬಾಗಿಲು (ಸ್ವರ್ಗದ ಬಾಗಿಲು) ತೆರೆಯುತ್ತದೆ.

ಓಂ ಶ್ರೀ ಸತ್ಯನಾರಾಯಣ ಸ್ವಾಮಿ ಮೂಲ ವಿಗ್ರಹಕ್ಕೆ ವಜ್ರಕವಚ ಧಾರಣೆ ವಿಶೇಷ ಅಲಂಕಾರ ಮಹಾಮಂಗಳಾರತಿ ತೀರ್ಥಪ್ರಸಾದ ವಿನಿಯೋಗ ಹಾಗೂ ವಿಷ್ಣು ಸಹಸ್ರನಾಮ ಪಾರಾಯಣ ಸಂಗೀತ ಇತ್ಯಾದಿ ಕಾರ್ಯಕ್ರಮಗಳು ನಡೆಯುತ್ತದೆ ರಾತ್ರಿ 10.30 ಏಕಾಂತ ಸೇವೆ ನಡೆಯಲಿದೆ ಎಂದು ದೇಗುಲದ ಪ್ರಕಟಣೆ ತಿಳಿಸಿದೆ.

Related Articles

ಪ್ರತಿಕ್ರಿಯೆ ನೀಡಿ

Latest Articles