ಶೀರೂರು ಮಠದ ನೂತನ ಯತಿಗಳಾಗಿ ಶ್ರೀವೇದವರ್ಧನ ತೀರ್ಥ ಶ್ರೀಪಾದರು

ಉಡುಪಿ: ಶೀರೂರು ಮಠದ 31ನೇ ಯತಿಗಳಾಗಿ ಶ್ರೀವೇದವರ್ಧನ ತೀರ್ಥ ಶ್ರೀಪಾದರ ಪಟ್ಟಾಭಿಷೇಕ ಕಾರ್ಯಕ್ರಮದ ವಿಧಿವಿಧಾನಗಳು ಮೇ 11 ರಿಂದ 14ರವರೆಗೆ ಶೀರೂರು ಮೂಲಮಠದಲ್ಲಿ ನಡೆಯಿತು.

ಶ್ರೀಕೃಷ್ಣ ಮಠದಲ್ಲಿ, ಪರ್ಯಾಯ ಪೀಠಾಧೀಶರಾದ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ಶ್ರೀ ಜಗದ್ಗುರು ಮಧ್ವಾಚಾರ್ಯ ಮಹಾಸಂಸ್ಥಾನ, ಶ್ರೀ ವಿಠಲಪಾದ ಪದ್ಮಾರಾಧಕ ಶ್ರೀ ವಾಮನ ತೀರ್ಥ ಯತಿ ಪರಂಪರೆಯ ಶ್ರೀ ಶೀರೂರು ಮಠದ ನೂತನ ಉತ್ತರಾಧಿಕಾರಿಗಳೂ, ಶ್ರೀವಿಶ್ವವಲ್ಲಭ ತೀರ್ಥ ಕರಕಮಲ ಸಂಜಾತರೂ ಆದ ಪೂಜ್ಯ ಶ್ರೀ ಶ್ರೀ ವೇದವರ್ಧನತೀರ್ಥ ಶ್ರೀಪಾದರನ್ನು ರಥಬೀದಿಯಲ್ಲಿ ಮೆರವಣಿಗೆಯಲ್ಲಿ ವಾದ್ಯಘೋಷ, ವೇದಘೋಷದೊಂದಿಗೆ ಬರಮಾಡಿಕೊಂಡರು. ಚಂದ್ರಶಾಲೆಯಲ್ಲಿ ಮಾಲಿಕೆ ಮಂಗಳಾರತಿ ನಡೆಯಿತು.

Related Articles

ಪ್ರತಿಕ್ರಿಯೆ ನೀಡಿ

Latest Articles