ಅಕ್ಷಯ ತೃತೀಯಾ – ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿಅಷ್ಟಾಕ್ಷರ ಹೋಮ ಶ್ರೀಗಂಧ ಲೇಪನ

ಬೆಂಗಳೂರಿನ ಜಯನಗರದ 5 ನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 108 ಶ್ರೀಸುಬುಧೇಂದ್ರ- ತೀರ್ಥ ಶ್ರೀಪಾದರ ಆದೇಶದಂತೆ ಭಕ್ತರ ಕಷ್ಟಕಾರ್ಪಣ್ಯಗಳು ಶೀಘ್ರ ನಿವಾರಣೆಗಾಗಿ ಅಕ್ಷಯ ತೃತೀಯಾ ಪ್ರಯುಕ್ತ ಶ್ರೀ ಮಠದಲ್ಲಿ “ಲೋಕ-ಕಲ್ಯಾಣ” ಕ್ಕಾಗಿ ಶ್ರೀ ರಾಘವೇಂದ್ರ ಅಷ್ಟಾಕ್ಷರ ಹೋಮ ಹಾಗೂ ಶ್ರೀ ರಾಘವೇಂದ್ರ ಸ್ವಾಮಿಗಳವರ ಬೃಂದಾವನಕ್ಕೆ ಫಲಪಂಚಾಮೃತ ಅಭಿಷೇಕ,”ಶ್ರೀಗಂಧಲೇಪನ” ಅಲಂಕಾರವು ಮಾಡಲಾಯಿತು ಈ ಸಂದರ್ಭದಲ್ಲಿ ಅರ್ಚಕರಿಂದ ವಿಶೇಷ ಶ್ರೀ ರಾಘವೇಂದ್ರ- ಅಷ್ಟಾಕ್ಷರ ಜಪ ಪಾರಾಯಣವು ಆರ್ ಕೆ ವಾದೀಂದ್ರಾಚಾರ್ಯರ ನೇತೃತ್ವದಲ್ಲಿ ನೆರವೇರಿತು.

ಗಂಧಲೇಪನ ಅಲಂಕಾರ

ಶೇಷಾದ್ರಿಪುರಂ ಫ್ಲಾಟ್ ಫಾರಂ ರಸ್ತೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಇಂದು ಅಕ್ಷಯ ತೃತೀಯ ಪ್ರಯುಕ್ತ ಶ್ರೀ ರಾಘವೇಂದ್ರ ಸ್ವಾಮಿಗಳ ಅಷ್ಟೋತ್ತರ ಸಹಿತ ಶ್ರೀ ರಾಯರ ಬೃಂದಾವನಕ್ಕೆ ಮತ್ತು ಶ್ರೀ ಸುಶಮೀಂದ್ರತೀರ್ಥರ ಬೃಂದಾವನಕ್ಕೆ ಪಂಚಾಮೃತ ಅಭಿಷೇಕ, ಗಂಧಲೇಪನ ಅಲಂಕಾರ, ಮಹಾಮಂಗಳಾರತಿ ಕಾರ್ಯಕ್ರಮಗಳು ನಡೆದವು.

Related Articles

ಪ್ರತಿಕ್ರಿಯೆ ನೀಡಿ

Latest Articles