ಗಣಪತ್ಯಥರ್ವಶೀರ್ಷ ಹೋಮ

ಉಡುಪಿ ಜಿಲ್ಲೆಯ ಸಾಲಿಗ್ರಾಮ ಶ್ರೀಗುರುನರಸಿಂಹ ದೇವಸ್ಥಾನದಲ್ಲಿ ಅಧಿಕಮಾಸದ ಪ್ರಯುಕ್ತವಾಗಿ ಕೋವಿಡ್- 19 ನಿವಾರಣೆ ಹಾಗೂ ಅತಿವೃಷ್ಟಿ ನಿಯಂತ್ರಣಕ್ಕಾಗಿ ಶ್ರೀದೇವರಲ್ಲಿ ಪ್ರಾರ್ಥಿಸಿ ಇದೇ ಅಕ್ಟೋಬರ್‍ 3ರ ಶನಿವಾರ ಬೆಳಗ್ಗೆ 8-30ರಿಂದ ಗಣಪತ್ಯಥರ್ವಶೀರ್ಷ ಹೋಮ ನಡೆಯಲಿದೆ.
ಭಕ್ತಾದಿಗಳು ಶ್ರೀದೇವಳಕ್ಕೆ ಬರುವಾಗ ಮಾಸ್ಕನ್ನು ಖಡ್ಡಾಯ ಧರಿಸಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಶ್ರೀದೇವರ ದರ್ಶನ ಮಾಡಬೇಕು ಹಾಗೂ ಕೊವೀಡ್ -19 ಹರಡುವಿಕೆಯಲ್ಲಿ ಸರಕಾರ ಸೂಚಿಸಿರುವ ಎಲ್ಲಾ ಮಾರ್ಗಸೂಚಿಗಳನ್ನು
ಕಡ್ಡಾಯವಾಗಿ ಪಾಲಿಸಬೇಕು ಎಂದು ಆಡಳಿತ ಮಂಡಳಿ ಅಧ್ಯಕ್ಷರಾದ ಕೆ.ಅನಂತಪದ್ಮನಾಭ ಐತಾಳ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

ಪ್ರತಿಕ್ರಿಯೆ ನೀಡಿ

Latest Articles