ಶಾಶ್ವತ ನಶ್ವರ

ಸಂಶಯದ ಶವದೆದಿರು ಕೊಲೆಗಾರರೆಲ್ಲರೂ
ಮಸಣದಿ ಕಾಯುತಿದೆ 
ಬೆಂಕಿ ಬಲು ಜೋರು

ಸುಳಿಗಾಳಿ ಬಯಸುತಿದೆ
ನೆತ್ತರ ಉಪ್ಪಿನ ರುಚಿ
ಕೆನ್ನಾಲಿ ಚಾಚಿ ಬಾಚಲು
ಬೆಂಕಿ ಬಯಸಿದೆ ಹಸಿ ಮಾಂಸ

ಮರದ ಮ್ಯಾಲ ಕುಳಿತಿದ್ದ ಊಸರ
ಚಣಕೊಮ್ಮೆ ಬಣ್ಣ ಬದಲಿಸುತಿತ್ತ
ಹೂಮ್ಯಾಲ ಕೂತ ಚಿಟ್ಟೆ ತಾ ತನ
ಮೈಬಣ್ಣ ನೋಡುತ ಜಂಬ ಪಡತಿತ್ತ

ಮ್ಯಾಲ ಹದ್ದು ನರಿ ನಾಯಿ ಬಿದ್ದು
ನಾ ಹಾರು ಬೂದಿಯಾಗುವದ
ತವಕದಿಂದ ಬಾಯ್ದರೆದು ನೋಡತಿತ್ತ
ಅರಿವಿಲ್ಲದ ಜನ ಕಣ್ಣೊರೆಸಿ ಹಿಂದಿರುಗಿತ್ತ.

*ಹನುಮೇಶ್ ಮಳಗಿ

ಹನುಮದ್ಗೀತ ಸಂ. 81,

ಮೊದಲನೆಯ ಮುಖ್ಯರಸ್ತೆ, ವಿನಾಯಕನಗರ, ಧಾರವಾಡ..580001

Related Articles

ಪ್ರತಿಕ್ರಿಯೆ ನೀಡಿ

Latest Articles