ಅನುಭವ ಮಂಟಪದಲ್ಲಿ ಮಕ್ಕಳ ಗೋಷ್ಠಿ

ಚಿತ್ರದುರ್ಗ : ಮುರುಘಾ ಮಠದಲ್ಲಿ ನಡೆಯುತ್ತಿದ್ದ ಶರಣ ಸಂಸ್ಕೃತಿ ಉತ್ಸವದಲ್ಲಿ ಸೋಮವಾರ ಅನುಭವ ಮಂಟಪದಲ್ಲಿ ಮಕ್ಕಳ ಗೋಷ್ಠಿ ನಡೆಯಿತು.

ಚಿತ್ರದುರ್ಗದ ಶ್ರೀ ಮಾದಾರಚೆನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರಚೆನ್ನಯ್ಯ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಸಮಾರಂಭದಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಜಿ.ರಾಧಿಕ  ಭಾಗವಹಿಸಿದ್ದರು.

ಜೀ ಟಿವಿ ಸರಿಗಮಪ ಪ್ರತಿಭೆ ತೇಜಸ್, ಜ್ಞಾನ, ಕಲರ‍್ಸ್ ಕನ್ನಡ ಟಿವಿ- ಕನ್ನಡ ಕೋಗಿಲೆ ಪ್ರತಿಭೆ ಅರ್ಜುನ್ ಇಟಗಿ ಮತ್ತು ಜೀ ಟಿವಿ ಸರಿಗಮಪ ಪ್ರತಿಭೆ ರುಬೀನಾ ಹು ನದಾಫ ರವರಿಂದ ಸುಗಮ ಸಂಗೀತ, ಸಾನಿಕಾ ಎಂ.ಪಿ.ಯವರಿಂದ ಭಾಷಣ, ಅನುಷ, ಡಿಂಪನಾ ಮತ್ತು ಸೊರಬ ಮಹಾಲಕ್ಷ್ಮಿ ರವರಿಂದ ನೃತ್ಯ, ಬೆಂಗಳೂರಿನ ರುದ್ರಾ ಡ್ಯಾನ್ಸ್ ಕಂಪನಿಯವರಿಂದ ಸಾಹಸ ಮತ್ತು ಸಮೂಹ ನೃತ್ಯ ನಡೆಸಿಕೊಟ್ಟರು.

ಶರಣ ಸಂಸ್ಕೃತಿ ಉತ್ಸವದ ಗೌರವಾಧ್ಯಕ್ಷರಾದ ಜ. ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಮಹಾಸ್ವಾಮಿಗಳು ಹಾಗೂ ಮುರುಘಾ ಶರಣರು ಉಪಸ್ಥಿತರಿದ್ದರು.

Related Articles

ಪ್ರತಿಕ್ರಿಯೆ ನೀಡಿ

Latest Articles