ಲೋಕಕಲ್ಯಾಣಕ್ಕಾಗಿ ಒಂದು ತಿಂಗಳ ಪರ್ಯಂತ ವಿಶೇಷ ಜಪಯಜ್ಞ

ನಮಃ ಶಂಕರಾಯ – ಜಪಯಜ್ಞ

ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಶ್ರೀ ಭಾರತೀತೀರ್ಥ ಮಹಾಸನ್ನಿಧಾನಂಗಳವರ ದಿವ್ಯ ಸಂಕಲ್ಪಮತ್ತು ಅನುಗ್ರಹದೊಂದಿಗೆ ಪ್ರಾರಂಭವಾದ ಶ್ರೀಶಾಂಕರ ತತ್ತ÷್ವಪ್ರಸಾರ ಅಭಿಯಾನದಿಂದ 2016ರಲ್ಲಿ ರಾಜ್ಯಾದ್ಯಂತ ಶ್ರೀ ಶಂಕರಾಚಾರ್ಯರ ಅಷ್ಟೋತ್ತರ ಶತನಾಮ ಪಾರಾಯಣ ಯಜ್ಞವನ್ನು ಹಮ್ಮಿಕೊಳ್ಳಲಾಗಿತ್ತು.

ಅಂದಿನಿ0ದ ಈ ಯಜ್ಞವು ಅವಿರತವಾಗಿ ನಡೆಯುತ್ತಿದ್ದಯ ಇಂದಿಗೂ ಸನಾತನಧರ್ಮೋದ್ಧಾರಕರಾದ ಜಗದ್ಗುರು ಶ್ರೀ ಶಂಕರ ಭಗವತ್ಪಾದಾಚಾರ್ಯರ ಪವಿತ್ರ ನಾಮದ ಪಾರಾಯಣ ಎಲ್ಲೆಡೆ ಪ್ರಚಲಿತವಾಗಿದ್ದು, ಮನೆಮನೆಗಳಲ್ಲಿ ನಿತ್ಯ ಪಾರಾಯಣದಲ್ಲಿದೆ.
2018 ರ ಮೇ 20 ರ ವಿಲಂಬಿನಾಮ ಸಂವತ್ಸರದ ಅಧೀಕ ಜೇಷ್ಠ ಶುಕ್ಲ ಪಂಚಮಿಯ0ದು ಶೃಂಗೇರಿಯಲ್ಲಿ ನಡೆದ ಈ ಯಜ್ಞದ ಸಮಾರೋಪ ಸಮಾರಂಭದಲ್ಲಿ ಜಗದ್ಗುರು ಶ್ರೀ ಶ್ರೀ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳು ತನ್ನ ಅನುಗ್ರಹ ಭಾಷಣದಲ್ಲಿ ‘ನಮಃ ಶಂಕರಾಯ’ ಎಂಬ ಮಂತ್ರದ ಉಪದೇಶವನ್ನು ಭಕ್ತರಿಗೆ ಅನುಗ್ರಹಿಸಿದ್ದರು.
ಪ್ರಸ್ತುತ ಬರುವ ಪ್ಲವನಾಮ ಸಂವತ್ಸರಕ್ಕೆ ಈ ಮಂತ್ರೋಪದೇಶವು ದೊರೆತು 3 ವರ್ಷಗಳು ಪೂರೈಸುತ್ತಿರುವುದು ಹಾಗೂ ಇದೇ ವರ್ಷ ಶ್ರೀ ಮಹಾಸನ್ನಿಧಾನಂಗಳವರ ಸಪ್ತತಿಪೂರ್ತಿ ವರ್ಧಂತಿ ಮಹೋತ್ಸವ ಸಂದರ್ಭವೂ ಇದಾಗಿರುವುದರಿಂದ ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಸ್ವಾಮಿಗಳ ಅಪ್ಪಣೆಯಂತೆ ಲೋಕಕಲ್ಯಾಣಕ್ಕಾಗಿ ಒಂದು ತಿಂಗಳ ಪರ್ಯಂತ ಈ ಮಂತ್ರದ ವಿಶೇಷ ಜಪಯಜ್ಞವನ್ನು ಹಮ್ಮಿಕೊಳ್ಳಲಾಗಿದೆ.

ಜಪಯಜ್ಞದ ಪ್ರತಿನಿತ್ಯದ ಸ್ವರೂಪ: ಗುರು ಪ್ರಾರ್ಥನೆ, ಶ್ರೀ ಶಂಕರಾಚಾರ್ಯ ಅಷ್ಟೋತ್ತರ ಶತನಾಮಾವಳಿ ಪಾರಾಯಣ (1 ಬಾರಿ), ನಮಃ ಶಂಕರಾಯ – ನಾಮ ಜಪ (ಕನಿಷ್ಟ ಒಂದು ಸಾವಿರ ಬಾರಿ).


ಆಸ್ತಿಕರೆಲ್ಲರೂ ಈ ಮಂತ್ರವನ್ನು ಪ್ರತಿನಿತ್ಯ ಜಪ ಮಾಡುತ್ತಿದ್ದರೂ, ಈ ಒಂದು ತಿಂಗಳ ಕಾಲ ತಮ್ಮ ತಮ್ಮ ಮನೆಗಳಲ್ಲಿ ಪ್ರತಿದಿನ ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಜಪಮಾಡಿ ಶ್ರೀ ಆದಿಶಂಕರ ಭಗವತ್ಪಾದರ ಮತ್ತು ಉಭಯ ಜಗದ್ಗುರು ಮಹಾಸ್ವಾಮಿಗಳವರ ಅನುಗ್ರಹಕ್ಕೆ ಪಾತ್ರರಾಗುವಂತೆ ಶ್ರೀಮಠ ಶೃಂಗೇರಿಯ ಆಡಳಿತಾಧಿಕಾರಿ ಡಾ.ವಿ.ಆರ್.ಗೌರಿಶಂಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Related Articles

ಪ್ರತಿಕ್ರಿಯೆ ನೀಡಿ

Latest Articles