ಮನೆ ಮನೆಗೆ ರಾಯರ ಅನುಗ್ರಹ, ಸಿಲಿಕಾನ್ ಸಿಟಿಯಲ್ಲಿ ರಾಯರ ಪಾದಪೂಜೆ

ಬೆಂಗಳೂರು: ಉದ್ಯಾನ ನಗರಿಯಲ್ಲಿ ಇರುವ ಅನೇಕ ರಾಯರ ಮಠದಿಂದ ಭಕ್ತರ  ಮನೆಮನೆಗೆ ತೆರಳಿ  ಗುರುರಾಯರ ಪಾದ ಪೂಜೆ  ನಡೆಸುವ  ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿದೆ. 

ಈ ಕಾರ್ಯಕ್ರಮದ ಅಂಗವಾಗಿ ನಗರದ ಲಗ್ಗರೆ  ರಾಯರ ಮಠದ ಮಧುಸೂಧನ್ ಆಚಾರ್ ನೇತೃತ್ವದಲ್ಲಿ ಬನಶಂಕರಿ 3 ನೇ ಹಂತದ  ಕತ್ರಿಗುಪ್ಪೆ  ವಾಟರ್ ಟ್ಯಾಂಕ್ ಬಳಿ  ಇರುವ   ರವಿಶಂಕರ್ ಅವರ  ಗೃಹದಲ್ಲಿ ರಾಯರ  ಪಾದಪೂಜೆ ಹಮ್ಮಿಕೊಳ್ಳಲಾಗಿತ್ತು. 

ಈ ಸಂದರ್ಭದಲ್ಲಿ ಶ್ರೀ ಪ್ರಹ್ಲಾದ ರಾಜರ ಉತ್ಸವ ಮೂರ್ತಿಗೆ ಕನಕಾಭಿಷೇಕ ಹಾಗೂ ರಾಯರ ಪಾದುಕೆಗಳಿಗೆ ಪಾದ ಪೂಜೆ ನೆರವೇರಿತು.

ಶ್ರೀ ರಾಘವೇಂದ್ರ ಸ್ವಾಮಿಗಳ 350 ನೇ ಆರಾಧನೆ ಆಗಸ್ಟ್ 23 ರಿಂದ 25 ರವರೆಗೆ ನಡೆಯಲಿದೆ ಎಂದು ನಗರದ ಲಗ್ಗರೆ  ರಾಯರ ಮಠದ ಮಧುಸೂಧನ್ ಆಚಾರ್ ತಿಳಿಸಿದ್ದಾರೆ.

ಮಾಹಿತಿ: ತೀರ್ಥಹಳ್ಳಿ ಅನಂತ  ಕಲ್ಲಾಪುರ

Related Articles

ಪ್ರತಿಕ್ರಿಯೆ ನೀಡಿ

Latest Articles