ದಿವ್ಯ ಚೇತನಗಳು…

*ಗುರುದೇವಿ ಮಲಕಣ್ಣವರ

ಗಾಂಧೀಜಿ.....ಶಾಸ್ತ್ರೀಜೀ.....
ಹೆತ್ತೊಡಲಿನ ಮಾಣಿಕ್ಯಗಳು
ಹೊತ್ತೊಡಲಿನ ಮುಕುಟ ಮಣಿಗಳು
ಪ್ರತೀ ಭಾರತೀಯ ರಕ್ತ ಕಣದ ಚೇತನಗಳು
     ಅಳಿದರೂ ಕಾಯ; ಉಳಿಯುವುದು ಕೀರ್ತಿ,
     ಈ ಉಕ್ತಿಯ ನಾಯಕರು....
     ಎಂಥಹ ಸಂದೇಶ ನೀಡಿದಿರಿ ನೀವು,!!
     ಜೀವನದ ಸಾರ್ಥಕತೆಯ ಪಡೆದಿರಿ.
ಭಾರತಾಂಬೆಯ ಕೀರ್ತಿ ಶಿಖರದ ಮುತ್ತುಗಳು
ನಿಸ್ವಾರ್ಥ ಬದುಕಿನ ರುಚಿ ಸವಿದವರು
ಜಗತ್ತಿಗೇ ಬೆಳಕನಿತ್ತವರು!
ಭರತಭೂಮಿಯ ಮಣ್ಣಿನ ಪಾವಿತ್ರ್ಯತೆ ಹೆಚ್ಚಸಿದವರು!!
     ಪುಸ್ತಕದ ಅಕ್ಷರಗಳಿಂದ ಇಂದಿನ ಪೀಳಿಗೆಗೆ
      ಪರಿಚಯಿಸುತ್ತದ್ದೇವೆ ನಿಮ್ಮನ್ನು;
      ಈ ಜಗದ ಕಣ್ಣುಗಳಿಗೆ ಬೆಳಕ ನೀಡಲು
      ಹುಟ್ಟಿಬರಬೇಕಿದೆ ನೀವೇ ಇನ್ನು!!
ಓ! ದಿವ್ಯತೆಯ ಧನ್ಯತಾ ಮೂರ್ತಿಗಳೇ
ಉದಯಿಸಿ ಬನ್ನಿ ಸಾಕಿನ್ನು;
ನಿಮ್ಮ ದಾರಿಕಾಯುತಾ ಮಂಕಾಗಿದೆ
ಭಾರತಮಾತೆಯ ಕಣ್ಣು!!
   ಈ ಚಿತ್ರಪಟಗಳ ಮೂಲಕ ಪರಿಚಯಿಸಿದ್ದು ಸಾಕು:
   ನಿಮ್ಮ ದರುಶನಕ್ಕಾಗಿ ಕಾಯುತಿವೆ;
  ಮುಗ್ಧ ಮಕ್ಕಳು, ಅವರಿಗೆ ನೀವೇ ಬೇಕು;
  ಬನ್ನಿ, ನಾಯಕತ್ವದ ಅರ್ಥ ತಿಳಿಸಲು,
  ಬನ್ನಿ,ಅಹಿಂಸೆಯ ಮಂತ್ರ ಕಲಿಸಲು,
   ಬನ್ನಿ,ನಿಸ್ತೇಜಗೊಂಡಿಹ ಮಣ್ಣಕಣಗಳಿಗೆ,
    ಫಲವತ್ತತೆ ತುಂಬಲು,
ಜಯಂತಿ ಬೇಡ,ಜನ್ಮದಿನ....ಆಚರಣೆಗಾಗಿ
ಕಾಯುತಿಹೆವು ಬನ್ನಿ....
ಓ!ದಿವ್ಯ ಚೇತನಗಳೇ... ಧರೆಗಿಳಿದು ಬನ್ನಿ..!

Related Articles

ಪ್ರತಿಕ್ರಿಯೆ ನೀಡಿ

Latest Articles