ಗಾಂಧಿ ತಾತ

*ವೈ.ಬಿ.ಕಡಕೋಳ

ಸೌಮ್ಯ ಸ್ವಭಾವದಿ
ಮಿತಭಾಷಿ
ಸ್ವಾತಂತ್ರö್ಯ ಹೋರಾಟದಿ
ಖಾದಿ ಧರಿಸಿದ
ಜಗತ್ತಿಗೆ ಆದರ್ಶ ತೋರಿದ
ಮಹಾತ್ಮ ಗಾಂಧೀ ತಾತ                              
 ವರ್ಣ ಭೇದ ನೀತಿಯ ನೀ ಖಂಡಿಸಿದಿ
ಆಫ್ರಿಕದಲಿ ಜನರ ಅನುರಾಗವ ಗಳಿಸಿದಿ
ಸಿರಿವಂತಿಕೆಯ ತೊಡೆದು
ಬಡವರ ಬಾಳಿನ ಬೆಳಕಾದ
ಮಹಾತ್ಮ ಗಾಂಧೀ ತಾತ                         
 ಅಸಹಕಾರ ಚಳುವಳಿ ಸಾರಿದೆ
ಉಪ್ಪಿನ ಸತ್ಯಾಗ್ರಹ ಹುಟ್ಟು ಹಾಕಿದೆ
ದಂಡೀಯಾತ್ರೆ ಕೈಗೊಂಡ ತಾತ
ಬ್ರಿಟೀಷರೇ ಭಾರತ ಬಿಟ್ಟು ತೊಲಗಲೆನುತ
 ಅಹಿಂಸೆಯ ರೂವಾರಿ ಗಾಂಧೀ ತಾತ                                                                       
ಓ ಗಾಂಧೀ ತಾತ
ನಿನ್ನ ನಡೆನುಡಿಗಳು ನಮಗಾದರ್ಶ
ಅನುದಿನಲಿ ಸ್ಮರಿಸುವೆವು
ಸತ್ಯ ಅಹಿಂಸೆಯ ತ್ಯಾಗ ಮೂರ್ತಿ
ನಿನ್ನನು ಓ ಗಾಂದೀ ತಾತ.
ಓ ಗಾಂಧೀ ತಾತ

Related Articles

ಪ್ರತಿಕ್ರಿಯೆ ನೀಡಿ

Latest Articles