ದಸರ

ಸಂಹಾರವಾಯಿತು ರಾವಣನದು
ಪಟ್ಟಾಭಿಷೇಕವಾಯಿತು ರಾಮನದು
ದುಷ್ಟ ಶಕ್ತಿಗಳ ಸಂಹಾರ
ಶಿಷ್ಟ ಶಕ್ತಿಗಳ ಸಾಕಾರ ದಸರ

ಪಾಂಡವ ಕುವರರು ಅಜ್ಞಾತವಾಸದೊಳು
ಬನ್ನಿ ಮರದೊಳು ಆಯುಧನಿರಿಸಿ
ಕುರುಕ್ಷೇತ್ರದಿ ಕಾದಿದರು
ದುಷ್ಟ ಶಕ್ತಿಗಳ ಸಂಹರಿಸಿದ ದಸರ

ವಿಜಯ ದಶಮಿಯಿದು ದಸರ
ವಿಜಯದ ಸಂಕೇತವಿದು ದಸರ
ಸಿಂಹವಾಹಿನಿ ಚಾಮುಂಡಿಯ
ನವರೂಪದಿ ಪೂಜಿಪ ದಸರ

ಬನ್ನಿಕೊಟ್ಟು ಸ್ನೇಹ ಬಾಂಧವ್ಯ ಸಾರುತ
ನಾವು ನೀವು ಬಂಗಾರದ ಹಾಗಿರೋಣ ಎನುತ
ರಕ್ತ ಬೀಜಾಸುರನ ಸಂಹರಿಪ ದುರ್ಗೆ
ನವದಿನದಿ ತಾಯಿಯ ಚರಿತಾಮೃತದಿ ದಸರ

ತಾಯಿ ದುರ್ಗೆಗೆ ನವವಿಧ ಅಲಂಕಾರ
ಘಟಸ್ಥಾಪನೆಯ ರೂಪದಲಿ ಸಾಕಾರ
ಪಂಚೋಪಚಾರದಿ ದೇವಿ ಆರಾಧನೆ
ದೇವಿ ಮಹಾತ್ಮೆಯ ಪುರಾಣ ಪಠಣ ದಸರ

 ಲೋಕದ ಕಂಠಕದ ದುಷ್ಟ ಸಂಹಾರ
ಪ್ರಕೃತಿ ವಿಕೋಪವ ತಡೆಯಲೆನುತ
ಭಕ್ತಿಯಲಿ ಬೇಡುತ ದೇವಿಯ
ವಿಜಯ ದಶಮಿಯ ಭವ್ಯ ದಸರ .
 
ವೈ.ಬಿ.ಕಡಕೋಳ

ರಚನೆ: ವೈ.ಬಿ.ಕಡಕೋಳ

ಶಿಕ್ಷಕ ಸಂಪನ್ಮೂಲ ವ್ಯಕ್ತಿಗಳು
ಮಾರುತಿ ಬಡಾವಣೆ ಸಿಂದೋಗಿ ಕ್ರಾಸ್
ಮುನವಳ್ಳಿ 591117
ಸವದತ್ತಿ ತಾಲೂಕು ಬೆಳಗಾವಿ ಜಿಲ್ಲೆ

Related Articles

ಪ್ರತಿಕ್ರಿಯೆ ನೀಡಿ

Latest Articles