ಮುತ್ತಿನ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವಿಷ್ಣು ದೀಪೋತ್ಸವ

ಬೆಂಗಳೂರು: ಚಾಮರಾಜಪೇಟೆಯ ಶ್ರೀ ಸತ್ಯನಾರಾಯಣ ಸ್ವಾಮಿ ಮತ್ತು ಶ್ರೀ ಮಹಾಲಕ್ಷ್ಮಿ ಹಾಗೂ ಶ್ರೀ ಮುತ್ತಿನ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ನವೆಂಬರ್ 19 ರಂದು ಹುಣ್ಣಿಮೆ ಹಾಗೂ ವಿಷ್ಣು ದೀಪೋತ್ಸವ (ಕೃತಿಕೋತ್ಸವ) ಪ್ರಯುಕ್ತ ಬೆಳಗ್ಗೆ 06.30ಕ್ಕೆ ಶ್ರೀ ಸ್ವಾಮಿಯವರಿಗೆ ಪಂಚಾಮೃತ ಅಭಿಷೇಕ , ವಿಶೇಷಅಲಂಕಾರ, ನಿತ್ಯ ಕೈಂಕರ್ಯಗಳು, ನಿವೇದನೆ, ಅರ್ಚನೆ ಮಂತ್ರ ಪುಷ್ಪ ಮಹಾಮಂಗಳಾರತಿ ನಡೆಯಲಿದೆ.

ಹುಣ್ಣಿಮೆ ಪ್ರಯುಕ್ತ ಬೆಳಗ್ಗೆ 10.30ಕ್ಕೆ “ಶ್ರೀ ಸತ್ಯನಾರಾಯಣ ವ್ರತ ಪೂಜೆ” ಹಾಗೂ ಮಹಾಮಂಗಳಾರತಿ ತೀರ್ಥಪ್ರಸಾದ ವಿನಿಯೋಗ ಸಂಜೆ 07 ಗಂಟೆಗೆ “ವಿಷ್ಣು ದೀಪೋತ್ಸವ” ಪ್ರಯುಕ್ತ ಶ್ರೀ ಸ್ವಾಮಿ ಹಾಗೂ ಉತ್ಸವ ಮೂರ್ತಿಗೆ ವಿಶೇಷ ಪೂಜೆ, ಉತ್ಸವ ಹಾಗೂ ದೀಪೋತ್ಸವ ಪ್ರಯುಕ್ತ ದೀಪಗಳನ್ನು ಹಚ್ಚುವುದು ಮಹಾಮಂಗಳಾರತಿ ತೀರ್ಥಪ್ರಸಾದ ವಿನಿಯೋಗ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

Related Articles

ಪ್ರತಿಕ್ರಿಯೆ ನೀಡಿ

Latest Articles