‘ವಿಜಯೀ ಭವ’ ಗೆಲುವಿಗೆ ನೂರಾರು ಮೆಟ್ಟಿಲು ವಿಶೇಷ ಕಾರ್ಯಕ್ರಮ ನವೆಂಬರ್ 13ರಂದು

ಬೆಂಗಳೂರು: ಶ್ರೀ ಅಖಿಲ ಹವ್ಯಕ ಮಹಾಸಭಾ ಪ್ರಸ್ತುತ ಪಡಿಸುವ ವಿಜಯೀ ಭವ (ಗೆಲುವಿಗೆ ನೂರಾರು ಮೆಟ್ಟಿಲು) ಸ್ಫೂರ್ತಿದಾಯಕ ಕಾರ್ಯಕ್ರಮ ನವೆಂಬರ್ 13 ರಂದು ಮಧ್ಯಾಹ್ನ3.30 ರಿಂದ ಮಲ್ಲೇಶ್ವರಂನ ಹವ್ಯಕ ಭವನದಲ್ಲಿ ನಡೆಯಲಿದೆ.

ಡಾ. ಬಿ.ಕೆ.ಎಸ್.ವರ್ಮಾ

ಕಾರ್ಯಕ್ರಮವನ್ನು ಡಾ. ಬಿ.ಕೆ.ಎಸ್.ವರ್ಮಾ ಅವರು ಉದ್ಘಾಟಿಸಲಿದ್ದು, ಡಾ. ಗಿರಿಧರ ಕಜೆ ಅಧ್ಯಕ್ಷತೆ ವಹಿಸುವರು.

ಡಾ. ಗಿರಿಧರ ಕಜೆ

ಚಕ್ರವರ್ತಿ ಸೂಲಿಬೆಲೆ ದಿಕ್ಸೂಚಿ ಭಾಷಣ ಮಾಡಲಿದ್ದು, ಕನ್ನಡ ಪ್ರಭ ದೈನಿಕ ಹಾಗೂ ಸುವರ್ಣ ನ್ಯೂಸ್ ವಾಹಿನಿಯ ಪ್ರಧಾನ ಸಂಪಾದಕ ರವಿ ಹೆಗಡೆ, ಬಿಂದು ವಾಟರ್ ಕಂಪನಿ ಮಾಲೀಕ ಸತ್ಯಶಂಕರ ಕೆ. ಉಪಸ್ಥಿತರಿರುವರು. ಸಂವಾದಕರಾಗಿ ಡಾ.ಸೀತಾ ಕೋಟೆ, ಮೋಹನ ಹೆಗಡೆ ಹೆರವಟ್ಟಾ ಭಾಗವಹಿಸುವರು.

ಚಕ್ರವರ್ತಿ ಸೂಲಿಬೆಲೆ

ವಿದ್ವಾನ್ ಸುಬ್ರಾಯ ಭಟ್, ಪಂಡಿತ್ ಗುರುಮೂರ್ತಿ ವೈದ್ಯ ಅವರಿಂದ ಸಂತೂರ್ ನಿನಾದ ಕಾರ್ಯಕ್ರಮ ನಡೆಯಲಿದೆ.
ಸಾಕೇತ್ ಶರ್ಮಾ, ಪ್ರಥ್ವೀ ಭಟ್, ಗುರುಕಿರಣ್ ಹೆಗಡೆ ಅವರಿಂದ ಘೋಷಗಾನ ಇರಲಿದೆ ಎಂದು ಪ್ರಕಟಣೆ ತಿಳಿಸಿದೆ.

Related Articles

ಪ್ರತಿಕ್ರಿಯೆ ನೀಡಿ

Latest Articles