ಭುವಿಯಲಿ ನೆಲೆಸಿಹ ದೇವ ಮಾನವ

ಶ್ವೇತ ವಸ್ತ್ರದಾ ಸರಳತೆಯ ಜೀವ
ಹಾಲು ಮನದ ಶಾಂತ ಮೂರ್ತಿ ಇವ
ಸರಳ ಜೀವನದ ಸಿದ್ದೇಶ್ವರ ಅಪ್ಪನಿವ

ಅಪ್ಪನವರ ವಾಣಿ ಕೇಳಿದವ ಪುಣ್ಯವಂತ
ದರುಶನ ಪಡೆದವನು ನಿಜ ಭಾಗ್ಯವಂತ
ನಿಜ ದೇವರನು ಕಂಡರವರು ಯಾರಿಹರು
ಇವರೇ ನೋಡಿರಿ ನಡೆದಾಡುವ ದೇವರು

ಜೀವನದ  ಅರ್ಥವನು ಸಾರುವಾ ತ್ಯಾಗಿಯು
ತತ್ವ ಜ್ಞಾನವನು ಬಿತ್ತುವಾ ಯೋಗಿಯು
ಅಪ್ಪನವರ ವಾಣಿ ಅರಿತವರಿಗಿಲ್ಲ ನೋವು
ಜೀವನದಿ ತುಂಬಲಿದೆ ನಲಿವು ಗೆಲುವು

ಮುಗಿಲೆತ್ತರದ ಜ್ಞಾನ ನಿಮ್ಮದು ದೇವ
ಸಾಗರದಾಚೆಯಲೂ ಮಾಡುವರು ನಿನ್ನ ಸ್ತವ
ಶಿರಸಾಷ್ಟಾಂಗ ವಂದನೆಗಳು ನಿಮಗೇ  ತಂದೆ
ನಿಮ್ಮ ಅಭಯ ಹಸ್ತ  ಎಮಗೆ ನೀಡಿರೆಂದೆ

ವರ್ಣಿಸಲು ಪದಗಳಿಗೆ ಸಿಗದ ವ್ಯಕ್ತಿತ್ವ
ಮೌನದಲಿ ನಿಂತಿರುವೆ ನಿಮ್ಮ ನೋಡುತ್ತ
ಪೂಜ್ಯ ಪಾದಕಮಲಗಳಿಗೆ ಸದಾ ನಮಿಸುತ್ತ
ಜೀವನದಿ ಪಾಲಿಸುವೆ ನಿಮ್ಮ ವಾಣಿಗಳ ತತ್ವ

✍️ ಶ್ರೀಮತಿ ಜ್ಯೋತಿ ಕೋಟಗಿ ಸ ಮಾ ಪ್ರಾ ಶಾಲೆ ತಲ್ಲೂರ

Related Articles

ಪ್ರತಿಕ್ರಿಯೆ ನೀಡಿ

Latest Articles