ಸಂಕ್ರಮಣ

* ಕಿರಣ ಯಲಿಗಾರ

ನಾಡಿನೆಲ್ಲೆಡೆ ಹಬ್ಬದ ಸಡಗರ ಈ ಮಕರ
ಸಂಕ್ರಮಣ
ನದಿಯಲ್ಲಿ ಮಾಡಿ ಪ್ರಾತಃಕಾಲ
ಪುಣ್ಯ ಸ್ನಾನ
ಒಂದಾಗಿ ಬೆಸೆಯುತ್ತಿದೆ ಎಲ್ಲ ಹೃದಯಗಳ
ಮಿಲನ
ನಾಡಿನ ರೈತರಿಗೆಲ್ಲ ಸುಗ್ಗಿಯ- ಹಿಗ್ಗಿನ
ಕಣ
ಸೂರ್ಯ ತನ್ನ ಪರಿಭ್ರಮಣ ಬದಲಿಸುವ
ಕ್ಷಣ
ಸವಿಯಬೇಕು ಪ್ರತಿಯೊಬ್ಬರು
ಸಿಹಿ ಎಳ್ಳು ಬೆಲ್ಲಗಳ ಮಿಶ್ರಣ
ನಿಮ್ಮ ಕುಟುಂಬದವರ ಜೊತೆ 
ಸಂಭ್ರಮಿಸಿ ಈ ದಿನ
ಅಳಿಸಿಹಾಕಿ ಹೃದಯದಲ್ಲಿರುವ
ಕಲ್ಮಶಗಳನ್ನ
ಹೊಸ ವರ್ಷಕೆ ಮಾಡಿ ಸಾಧನೆಯ
ಸಂಕಲ್ಪವನ್ನ
ನಿತ್ಯ ಕುಡಿಯಿರಿ ತಾಳ್ಮೆಯ
ಅಮೃತವನ್ನ
ಗೌರವಿಸಬೇಕು ಎಲ್ಲ ಗುರು
ಹಿರಿಯರನ್ನ.

Related Articles

ಪ್ರತಿಕ್ರಿಯೆ ನೀಡಿ

Latest Articles