ವಿಷ್ಣುಸಹಸ್ರನಾಮ ಪಾರಾಯಣ, ಸಮಾರೋಪ

ಬೆಂಗಳೂರು: ಡಾ. ಅರಳುಮಲ್ಲಿಗೆ ಪಾರ್ಥಸಾರಥಿ ಅವರ ನೇತೃತ್ವದಲ್ಲಿ ಸಪ್ತಗಿರಿ ಮಂಡಲಿಯ ನೂರಾರು ಮಹಿಳೆಯರು ಪ್ರತಿನಿತ್ಯ 11 ಬಾರಿ ವಿಷ್ಣುಸಹಸ್ರನಾಮ ಪಾರಾಯಣವನ್ನು 11 ದಿನಗಳ ಕಾಲ ಮಾಡಿ, ಒಂದು ವಿಷ್ಣುಸಹಸ್ರನಾಮ ಚಕ್ರವನ್ನು, ಅಂತಹ 22 ಚಕ್ರವನ್ನು ಯಶಸ್ವಿಯಾಗಿ ಪೂರೈಸಿ , ಬೆಂಗಳೂರಿನ ಸುದ್ದುಗುಂಟೆ ಪಾಳ್ಯದ ದೇವಾಲಯದಲ್ಲಿ ಅದರ ಸಮಾರೋಪವನ್ನು ಜುಲೈ 20 ರಂದು ಏರ್ಪಡಿಸಲಾಗಿತ್ತು.

ನೂರಾರು ಮಹಿಳೆಯರು ನಿರಂತರ ವಿಷ್ಣುಸಹಸ್ರನಾಮ ಪಾರಾಯಣ ಮಾಡಿ, ವಿಷ್ಣುಸಹಸ್ರನಾಮ ಹೋಮ ಮಾಡಿ,ಅರಳುಮಲ್ಲಿಗೆ ಯವರ ವಿಶೇಷ ಪ್ರವಚನವನ್ನು ಏರ್ಪಡಿಸಿತ್ತು. ಗ್ಲೋಬಲ್ ವಿಷ್ಣುಸಹಸ್ರನಾಮ ಸತ್ಸಂಗ್ ಫೆಡರೇಷನ್ನಿನ ಮಂಗಳಾಭಾಸ್ಕರ್, ಭಾನುಪ್ರಕಾಶ್, ಪ್ರೇಮಲೀಲಾ, ಮುಂತಾದವರು ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ ರಾಜ್ಯದ ಮಾಜಿ ಮಂತ್ರಿಗಳಾದ ರಾಮಲಿಂಗಾರೆಡ್ಡಿ, ಜಯನಗರದ ಶಾಸಕರಾದ ಸೌಮ್ಯರೆಡ್ಡಿಯವರು ಅರಳುಮಲ್ಲಿಗೆಯವರಿಗೆ ಗುರುವಂದನೆ ಸಲ್ಲಿಸಿದರು.

ಕೋಟಿ ವಿಷ್ಣುಸಹಸ್ರನಾಮ ಪಾರಾಯಣ ಮಾಡಿ ಇತಿಹಾಸ ನಿರ್ಮಿಸಿದ ಸಪ್ತಗಿರಿ ಮಂಡಲಿಯ ಪ್ರೇಮಲೀಲಾ ಹಾಗೂ ತಂಡದವರನ್ನು ಅರಳುಮಲ್ಲಿಗೆ ಅವರು ಅಭಿನಂದಿಸಿದರು.

Related Articles

ಪ್ರತಿಕ್ರಿಯೆ ನೀಡಿ

Latest Articles