ಶ್ರೀ ವರಸಿದ್ಧಿ ವಿನಾಯಕ ದೇವಾಲಯದಲ್ಲಿ ದಸರಾ ಮಹೋತ್ಸವ

ಬೆಂಗಳೂರು: ನಾಗರಬಾವಿ ಮುಖ್ಯರಸ್ತೆಯ ಕೆನರಾ ಬ್ಯಾಂಕ್ ಕಾಲೋನಿಯಲ್ಲಿರುವ ಶ್ರೀ ವರಸಿದ್ಧಿ ವಿನಾಯಕ ದೇವಾಲಯದಲ್ಲಿ ದಸರಾ ಪ್ರಯುಕ್ತ ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 5ರ ವರೆಗೆ ಪ್ರತಿದಿನ ವಿಶೇಷ ಅಲಂಕಾರ, ಸಂಜೆ 6-30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದು ಅವುಗಳ ವಿವರಗಳು ಈ ರೀತಿ ಇವೆ :

ಸೆಪ್ಟೆಂಬರ್ 26 – ಹರಿದ್ರಾ-ಕುಂಕುಮ ಅಲಂಕಾರ, ಶ್ರೀಮತಿ ಶ್ರೀದೇವಿ ಬಿ. ಮತ್ತು ತಂಡದವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ.

ಸೆಪ್ಟೆಂಬರ್ 27 – ನವನೀತ ಅಲಂಕಾರ, ಕೆನರಾ ಬ್ಯಾಂಕ್ ಕಾಲೋನಿಯ ಮಹಿಳಾ ಮಂಡಲಿ ಸದಸ್ಯರಿಂದ “ಸಾಂಸ್ಕೃತಿಕ ಕಾರ್ಯಕ್ರಮಗಳು”.

ಸೆಪ್ಟೆಂಬರ್ 28 – ತರಕಾರಿ ಅಲಂಕಾರ, ಶ್ರೀಮತಿ ಸುಷ್ಮಾ ಸಂತೋಷ್ ಮತ್ತು ಸಂಗಡಿಗರಿಂದ “ಕರ್ನಾಟಕ ಶಾಸ್ತ್ರೀಯ ಸಂಗೀತ” .

ಸೆಪ್ಟೆಂಬರ್ 29 – ಕೊಬ್ಬರಿ ತುರಿ ಅಲಂಕಾರ, ಶ್ರೀ ಹಿರೇಮಗಳೂರು ಪ್ರದೀಪ್ ಮತ್ತು ತಂಡದವರಿಂದ “ಭಕ್ತಿ ಗೀತೆಗಳು”.

ಸೆಪ್ಟೆಂಬರ್ 30 — ಶ್ರೀಗಂಧ ಅಲಂಕಾರ, ಶ್ರೀಮತಿ ರೂಪಾ ಪ್ರಭಂಜನ, ಶ್ರೀಮತಿ ರಮ್ಯಾ ಸುಧೀರ್ ಇವರಿಂದ “ಹರಿನಾಮ ಸಂಕೀರ್ತನೆ” ಶ್ರೀ ಅಮಿತ್ ಶರ್ಮಾ (ಕೀ-ಬೋಡ್೯), ಶ್ರೀ ಸುದರ್ಶನ್ (ತಬಲಾ).

ಅಕ್ಟೋಬರ್ 1 – ಪಂಚವರ್ಣ ಅಲಂಕಾರ, ಶ್ರೀ ಶ್ರೀಹರಿ ಭಟ್ ಮತ್ತು ತಂಡದವರಿಂದ “ಕರ್ನಾಟಕ ಶಾಸ್ತ್ರೀಯ ಸಂಗೀತ” .

ಅಕ್ಟೋಬರ್ 2 – ಚಂದನ ಅಲಂಕಾರ, ಶ್ರೀಮತಿ ಸುಪ್ರಿಯಾ ಮತ್ತು ಶ್ರೀಮತಿ ಪಿ. ಎಸ್. ಸುಕನ್ಯಾ ಇವರಿಂದ “ಭರತನಾಟ್ಯ”.

ಅಕ್ಟೋಬರ್ 3 – ಹೂವಿನ ಅಲಂಕಾರ, “ದುರ್ಗಾಷ್ಟಮಿ”-ದುರ್ಗಾ ನಮಸ್ಕಾರ ಪೂಜೆ .

ಅಕ್ಟೋಬರ್ 4 – ತ್ರಿವರ್ಣ ಅಲಂಕಾರ, ದೇವಸ್ಥಾನದ ಭಜನಾ ಮಂಡಳಿಯ ಸದಸ್ಯರಿಂದ “ಭಜನೆ” ಅಕ್ಟೋಬರ್ 5 – ರಜತ ಅಲಂಕಾರ, ಶ್ರೀ ನಾಗಚೇತನ್ ಎಸ್. ಎಂ. ಮತ್ತು ತಂಡದವರಿಂದ “ಕರ್ನಾಟಕ ಶಾಸ್ತ್ರೀಯ ಸಂಗೀತ” ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.

Related Articles

ಪ್ರತಿಕ್ರಿಯೆ ನೀಡಿ

Latest Articles