ಫೆ. 17ರಂದು ವಿಶ್ವಗುರು ಬಸವಣ್ಣನವರ ಭಾವಚಿತ್ರ ಅನಾವರಣ

ಬೆಂಗಳೂರು: ಫೆ. 17ರಂದು ಎಲ್ಲಾಜಿಲ್ಲಾಮತ್ತು ತಾಲೂಕುಗಳಲ್ಲಿಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಭಾವಚಿತ್ರ ಅನಾವರಣ ಸಮಾರಂಭವನ್ನು ಆಯೋಜಿಸುವಂತೆ ರಾಜ್ಯ ಸರಕಾರ ಸುತ್ತೋಲೆ ಹೊರಡಿಸಿದೆ.
ರಾಜ್ಯದ ಎಲ್ಲನಗರ ಸ್ಥಳೀಯ ಸಂಸ್ಥೆಗಳು, ಗ್ರಾಮೀಣ ಸ್ಥಳೀಯ ಸಂಸ್ಥೆಗಳು ಹಾಗೂ ಎಲ್ಲಾಸರಕಾರಿ ಕಚೇರಿಗಳಲ್ಲಿಕಡ್ಡಾಯವಾಗಿ ಬಸವಣ್ಣನವರ ಭಾವಚಿತ್ರವನ್ನು ಅಳವಡಿಸುವಂತೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಸರಕಾರಿ ಕಚೇರಿಗಳಲ್ಲಿಅಳವಡಿಸುವ ಬಸವಣ್ಣನವರ ಭಾವಚಿತ್ರದಲ್ಲಿವಿಶ್ವಗುರು ಬಸವಣ್ಣ ಸಾಂಸ್ಕೃತಿಕ ನಾಯಕ ಎಂದು ನಮೂದಿಸಬೇಕು. ರಾಜ್ಯ, ಜಿಲ್ಲೆಹಾಗೂ ತಾಲೂಕು ಮಟ್ಟದಲ್ಲಿನಡೆಯುವ ಎಲ್ಲಕಾರ್ಯಕ್ರಮಗಳಲ್ಲಿಬಸವಣ್ಣನವರ ಚಿಂತನೆ ಹಾಗೂ ಸರಕಾರದ ಉದ್ದೇಶಗಳ ಕುರಿತು ಅರಿವು ಮೂಡಿಸುವಂತೆ ಸುತ್ತೋಲೆ ಹೊರಡಿಸಿದೆ.

Related Articles

ಪ್ರತಿಕ್ರಿಯೆ ನೀಡಿ

Latest Articles