ಬಸವಾ ಎಂದೊಡೆ….

ಕತ್ತಲೆ ಕಳೆದು
ಬದುಕಿನ ಬವಣೆ 
ದೂರ ಸರಿದು
ಬೆಳಕಿನೆಡೆಗೆ ಹೆಜ್ಜೆ ಹಾಕಲು

ಅನುಭಾವಿ ಶರಣರ
ಸಂಗವೇ ದೊರೆತು
ಕೂಡಲ ಸಂಗಮನ
ಒಲುಮೆಗೆ ಪಾತ್ರನಾಗುವೆಡೆ

ಜ್ಞಾನ, ಮೌಲ್ಶಗಳ ರಾಶಿಯೇ 
ವಚನಗಳು ಸುಳಿಯಲು
ಮನದುಂಬಿ  ಸೆಳೆಯಲು
ಜೀವನಕೆ ನಿತ್ಶ ಪಾಠವಾಗಲು.

ಉಡುವ-ಉಂಬುವ
ನುಡಿವ-ನಡೆವ
ಬದುಕಿನ ಬಗೆ ಏನೆಂದು
ಮಾರ್ಗ ತೋರಲು

ಇಷ್ಟಲಿಂಗ ಪೂಜೆ
ಅಂತರಿಕ ಶುದ್ಧಿಗಾಯ್ತು
ಭಕ್ತಿಭಾವ ಧಾರೆಯಿಂದ
ಸನ್ಮಾರ್ಗದ ದಾರಿ ಕಾಣಲು

ಮೇಲು-ಕೀಳು
ಭೇದ-ಭಾವ ಅಳಿಸಿ ಹಾಕಿ
ಸಕಲರೂ ಸಮಸಮಾನರೆಂದು 
ಯುಕ್ತ ಜೀವನಕೆ ಶಕ್ತಿ ತುಂಬಲು 

ಅಂದಿನಿಂದ ಇಂದಿಗೂ
ನಿನ್ನ ಹೆಸರಿನಲ್ಲಿ ಮಠ-ಮಾನ್ನಿಗ ಅನೇಕರು  
ನಿನ್ನ ಜಯಂತಿ, ಜಾತ್ರೆಯ ತೇರುಗಳನ್ನು
ಎಳೆಯುವವರೇ  ಸಾಂಗೋಪಾಂಗವಾಗಿ
ತಮ್ಮ ಬುತ್ತಿಗಾಗಿ, ಮೇಲೋಗರಿಗಾಗಿ !

ಚಾಚೂ ತಪ್ಪದೆ ವಚನಗಳಮೇಲೊಂದಿಷ್ಟು
ವಚನ ಪ್ರವಾಚಿಸುವವರೇ ಹೆಚ್ಚು ರುಚಿಗಾಗಿ ! 
ಆಚರಣೆಗಳಲ್ಲಿ ಪಚನಮಾಡಿಕೊಳ್ಳದೇ 
ಅಂತರಂಗದಲ್ಲಿ ಭುಕ್ತಿ ತುಂಬಿರಲು,  ಮತ್ತೆ ಮತ್ತೆ
ನೆನಪಾಗುತ್ತವೆ ಬಸವಪೂರ್ವದ ಆ ದಿನಗಳು... !
  ಅಮರೇಗೌಡ ಪಾಟೀಲ ಜಾಲಿಹಾಳ, ಬು. ಬ. ನಗರ, ಕುಷ್ಟಗಿ

Related Articles

ಪ್ರತಿಕ್ರಿಯೆ ನೀಡಿ

Latest Articles