ಧರ್ಮಸ್ಥಳ: 7ನೇ ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ರಾಜ್ಯಮಟ್ಟದ ಯೋಗ ಪ್ರಬಂಧ ಸ್ಪರ್ಧೆ

ಧರ್ಮಸ್ಥಳ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ, ಶಾಂತಿವನ ಟ್ರಸ್ಟ್ ಇದರ ವತಿಯಿಂದ ಪ್ರಾಥಮಿಕ, ಪ್ರೌಢ, ಕಾಲೇಜು ಹಾಗೂ ಸಾರ್ವಜನಿಕ ವಿಭಾಗದಿಂದ ರಾಜ್ಯಮಟ್ಟದ ಯೋಗ ಪ್ರಬಂಧ ಸ್ಪರ್ಧೆ ನಡೆಸುತ್ತಿದೆ.
ಸ್ಪರ್ಧಾ ವಿಷಯ:
ಪ್ರಾಥಮಿಕ ಶಾಲಾ ವಿಭಾಗ: ಮಕ್ಕಳಿಗೆ ಯೋಗದ ಅಗತ್ಯತೆ
ಪ್ರೌಢಶಾಲಾ ವಿಭಾಗ: ಆರೋಗ್ಯ ಕಾಪಾಡುವಲಿಯೋಗದ ಅಗತ್ಯತೆ
ಕಾಲೇಜು ವಿಭಾಗ: ಸ್ವಸ್ಥ ಸಮಾಜದ ನಿರ್ಮಾಣದಲ್ಲಿ ಯುವಜನತೆ ಮತ್ತು ಯೋಗ
ಸಾರ್ವಜನಿಕ ವಿಭಾಗ: ಸುಂದರ ಬದುಕಿಗೆ ಯೋಗದ ಅವಶ್ಯಕತೆ.

ಸ್ಪರ್ಧೆಯಲ್ಲಿ ಭಾಗವಹಿಸುವವರು ಜನ್ಮ ದಿನಾಂಕದ ದೃಢೀಕರಣವನ್ನು ಸಲ್ಲಿಸಬೇಕು.
ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರ ನೀಡಲಾಗುತ್ತದೆ.
ಪ್ರತೀ ವಿಭಾಗದಲ್ಲಿ ಪ್ರಥಮ, ದ್ವಿತೀಯ, ತೃತೀಯ ವಿಜೇತರಿಗೆ ಪ್ರಮಾಣ ಪತ್ರ ಹಾಗೂ ನಗದು ಬಹುಮಾನವಿದೆ.
ಪ್ರಬಂಧವನ್ನು ಎ- 4 ಸೈಜ್‌ನ ಹಾಳೆಯಲ್ಲಿ ಎರಡು ಪುಟ ಮೀರದಂತೆ ಕನ್ನಡ ಭಾಷೆಯಲ್ಲಿ ಬರೆದು ದಿನಾಂಕ ಜೂನ್ 17 ರ ಸಂಜೆ 5 ಗಂಟೆಯ ಒಳಗೆ ಈ ಕೆಳಕಂಡ ವಾಟ್ಸಪ್ ಸಂಖ್ಯೆಗೆ ಕಳುಹಿಸಿಕೊಡಬಹುದು. ತೀರ್ಪುಗಾರರ ನಿರ್ಣಯವೇ ಅಂತಿಮ.

Related Articles

ಪ್ರತಿಕ್ರಿಯೆ ನೀಡಿ

Latest Articles