ಸಾಲಿಗ್ರಾಮ ಶ್ರೀ ಗುರುನರಸಿಂಹ ಸ್ವಾಮಿಗೆ ಸೀಯಾಳ ಅಭಿಷೇಕ ಜೂನ್ 15 ರಂದು

ಸಾಲಿಗ್ರಾಮ: ಉಡುಪಿ ಜಿಲ್ಲೆಯ ಸಾಲಿಗ್ರಾಮ ಶ್ರೀ ಗುರುನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಜೂನ್ 15 ರಂದು (ಮಿಥುನ ಸಂಕ್ರಮಣ) ಉತ್ತಮ ಮಳೆ ಬೆಳೆಗಾಗಿ ಪ್ರಾರ್ಥಿಸಿ ವರ್ಷಂಪ್ರತಿಯಂತೆ ಮಾಡುವ ಶ್ರೀ ಗುರುನರಸಿಂಹ, ಶ್ರೀ ಆಂಜನೇಯ ಮತ್ತು ಪರಿವಾರ ದೇವರುಗಳಿಗೆ ಸೀಯಾಳ ಅಭಿಷೇಕವನ್ನು ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರದ ಮಾರ್ಗಸೂಚಿಯನ್ನು ಅನುಸರಿಸಿ ಅರ್ಚಕರು ಮತ್ತು ಸೀಮಿತ ಸಿಬ್ಬಂದಿಯ ಸಹಕಾರದೊಂದಿಗೆ ಸರಳವಾಗಿ ಆಚರಿಸಲಾಗುವುದು.

‘ನಮ್ಮೆಲ್ಲರ ಸಮಷ್ಟಿ ಪ್ರಾರ್ಥನೆಯಿಂದ ಆಂಜನೇಯ ಸಹಿತ ಶ್ರೀ ಮದ್ಯೋಗಾನಂದ ಗುರುವು ಸಂತುಷ್ಟನಾಗಿ ನಾಡಿನೆಲ್ಲೆಡೆ ಶಾಂತಿ ಸುಭಿಕ್ಷೆಯು ನೆಲೆಸಲಿದೆಯೆಂಬ ನಂಬಿಕೆಯೊಂದಿಗೆ’ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷರಾದ ಡಾ ಕೆಎಸ್ ಕಾರಂತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

ಪ್ರತಿಕ್ರಿಯೆ ನೀಡಿ

Latest Articles