‘ಶ್ರೀ ರಾಮೇಶ್ವರ ಉತ್ಸವ’ ಹಾಡಿನ ಧ್ವನಿಸುರುಳಿ ಬಿಡುಗಡೆ ನಾಳೆ

ತೀರ್ಥಹಳ್ಳಿ: ಮಲೆನಾಡ ಕೋಗಿಲೆ ತಂಡದವರಿ0ದ ‘ರಾಮೇಶ್ವರ ಉತ್ಸವ’ ಹಾಡಿನ ಧ್ವನಿ ಸುರುಳಿ ಬಿಡುಗಡೆ ಕಾರ್ಯಕ್ರಮ ಜನವರಿ 3ರಂದು ಬೆಳಗ್ಗೆ 11 ಗಂಟೆಗೆ ತೀರ್ಥಹಳ್ಳಿಯ ಶ್ರೀ ರಾಮೇಶ್ವರ ಸ್ವಾಮಿ ಸನ್ನಿಧಿಯಲ್ಲಿ ನಡೆಯಲಿದೆ.
ರಾಜ್ಯ ಗೃಹ ಸಚಿವ ಅರಗ ಜ್ಞಾನೇಂದ್ರ ಧ್ವನಿ ಸುರುಳಿ ಬಿಡುಗಡೆ ಮಾಡುವರು.
‘ರಾಮೇಶ್ವರ ಉತ್ಸವ’ ಹಾಡಿನ ಗಾಯನ: ರಾಘವೇಂದ್ರ ಡಿಜಿ ಮತ್ತು ತಂಡ, ಸಾಹಿತ್ಯ: ಅನಂತ ಕಲ್ಲಾಪುರ ತೀರ್ಥಹಳ್ಳಿ, ರಾಗಸಂಯೋಜನೆ: ಗರ್ತಿಕೆರೆ ರಾಘಣ್ಣ, ಸಂಗೀತ: ಎಸ್ ಯು ಮ್ಯೂಸಿಕ್ ಕುಂದಾಪುರ.

ಕಾರ್ಯಕ್ರಮದಲ್ಲಿ ರಾಮೇಶ್ವರ ಜಾತ್ರಾ ಸಮಿತಿ ಸದಸ್ಯ ಜಾತ್ರಾ ಸಮಿತಿ ಮತ್ತು ಪಟ್ಟಣ ಪಂಚಾಯತ್ ಸದಸ್ಯರಾದ ರಾಘವೇಂದ್ರ ಸೊಪ್ಪು ಗುಡ್ಡೆ, ತೀರ್ಥಹಳ್ಳಿ ಕ್ಷೇತ್ರದ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಕೆಸ್ತೂರು ಮಂಜುನಾಥ್ ,ತೀರ್ಥಹಳ್ಳಿ ಭಾಜಪ ಅಧ್ಯಕ್ಷರಾದ ರಾಘವೇಂದ್ರ ನಾಯಕ್, ರಂಗಾಯಣ ನಿರ್ದೇಶಕರು ಮತ್ತು ಪಟ್ಟಣ ಪಂಚಾಯತ್ ಸದಸ್ಯರಾದ ಸಂದೇಶ್ ಜವಳಿ, ವಿಶ್ವ ಹಿಂದು ಪರಿಷತ್ ಕಾರ್ಯದರ್ಶಿ ಗಣೇಶ್ ಪ್ರಸಾದ್  ಮತ್ತು ತೀರ್ಥಳ್ಳಿ ಭಾಜಪ ಯುವ ಮೋರ್ಚಾದ ಅಧ್ಯಕ್ಷರಾದ ಸಂತೋಷ್ ದೇವಾಡಿಗ ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.

Related Articles

ಪ್ರತಿಕ್ರಿಯೆ ನೀಡಿ

Latest Articles